teacher; ಸಂಸ್ಕಾರ ಹೇಳಿಕೊಡುವಲ್ಲಿ ಶಿಕ್ಷಕರ ಪಾತ್ರ ದೊಡ್ಡದು

ದಾವಣಗೆರೆ, ಸೆ.06: ಮಕ್ಕಳಲ್ಲಿ ಶಿಸ್ತು ಮತ್ತು ಸಂಸ್ಕಾರವನ್ನ ಹೇಳಿಕೊಡುವಲ್ಲಿ ಶಿಕ್ಷಕರ (teacher) ಪಾತ್ರ ಬಹಳ ದೊಡ್ಡದು ಎಂದು ಡಾ. ಪುಷ್ಪಲತಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ಅಭಿಪ್ರಾಯಪಟ್ಟರು.

ಇಂದು ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ದಾವಣಗೆರೆ ದಕ್ಷಿಣ ವಿಭಾಗದಿಂದ ಶಿಕ್ಷಕರ ದಿನಾಚರಣೆ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ತಿಳಿಸಿದರು ಹಾಗೂ ಮಕ್ಕಳಿಗೆ ತಾಯಿಯೇ ಮೊದಲ ಗುರು ಹಾಗೂ ಶಿಕ್ಷಕರೇ ಎರಡನೇ ಗುರು ಮತ್ತು ಮೂರನೇ ತಾಯಿ ಭಾರತಾಂಬೆ ಎಂದು ತಿಳಿಸಿದರು.

ಡಾ.ರವಿಕುಮಾರ್ ಎ.ಜೆ ಅಧ್ಯಕ್ಷರು ಮಾತನಾಡುತ್ತಾ ಮಕ್ಕಳಲ್ಲಿ ಜೀವನ ಕೌಶಲ್ಯಗಳನ್ನು ಮತ್ತು ಸುಸಂಸ್ಕೃತರನ್ನಾಗಿ ಮಾಡುವವರೇ ಶಿಕ್ಷಕರು,ಮಕ್ಕಳು ಶಿಕ್ಷಕರ ಗುಣಗಳನ್ನು ಹಾಗೂ ವೇಷಭೂಷಣನ್ನು ಗಮನಿಸುತ್ತಿರುತ್ತಾರೆ ಹಾಗಾಗಿ ಶಿಕ್ಷಕರು ಅವರನ್ನು ತಿದ್ದಿ ತಿದ್ದಿ ಬುದ್ದಿ ನೀಡುತ್ತಾ ಬಂದರೆ ಅವರನ್ನು ಕೂಡ ದೇಶಕ್ಕೆ ಉತ್ತಮ ಕೊಡುಗೆಯನ್ನಾಗಿ ನೀವು ಮಾಡಬಹುದು ಎಂದು ತಿಳಿಸಿದರು.

krishna janmashtami; ಆರ್ ಜಿ ಪ್ರಿ ಸ್ಕೂಲ್ ನಲ್ಲಿ ಕೃಷ್ಣ ಜನ್ಮಾಷ್ಟಮಿ

ಶ್ರೀ ಬಡಿದಾಳ್ ನಾಗರಾಜ್ ಪತ್ರಕರ್ತರು ಮಾತನಾಡುತ್ತಾ ಒಳ್ಳೆಯ ಗುಣಗಳನ್ನು ಬೆಳೆಸುವ ಪೋಷಿಸುವರು ಶಿಕ್ಷಕರು ಮಾತ್ರ ಎಂದು ಅಭಿಪ್ರಾಯಪಟ್ಟರು. ಯಾವುದೇ ಮಕ್ಕಳಲ್ಲಿ ನೇರ & ಶಿಸ್ತಿನಿಂದ ಬೆಳೆಸಿದರೆ ಅವರು ಮುಂದೊಂದು ದಿನ ಒಳ್ಳೆಯ ನಡತೆಗಳನ್ನು ಕಲಿತು ಮಾದರಿ ಯಾಗಿ ಬದುಕುತ್ತಾರೆ. ಆ ಒಂದು ಶಕ್ತಿ ಶಿಕ್ಷಣದಲ್ಲಿ ಇದೆ ಎಂದು ತಿಳಿಸಿದರು.

ತೇಜಸ್ವಿನಿ ಪ್ರಕಾಶ್ ಅವರು ಮಾತನಾಡುತ್ತಾ ಶಿಕ್ಷಕರ ವೃತ್ತಿ ಬಹಳ ಪವಿತ್ರವಾದದ್ದು ಇಂದು ತಿಳಿಸಿದರು ಮತ್ತು ಹೆಚ್ ಆಂಜನೇಯ ಮೂರ್ತಿ ಕೂಡ ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರು ರವಿಚಂದ್ರ ಕೂಡ ಪರಿಷತ್ತಿನ ಕೆಲಸ ಕಾರ್ಯಗಳನ್ನು ಕೊಂಡಾಡಿದರು.

ನಾವು ಒಂದು ಗುರಿ ಮುಟ್ಟಬೇಕಾದರೆ ನಾವು ಕಲಿತ ವಿದ್ಯೆ ಶಿಕ್ಷಣದಿಂದಲೇ ನಾವು ಸಾಧಿಸಲು ಸಹಾಯವಾಗುತ್ತದೆ, ನಮಗೆ ಶಿಕ್ಷಣ ನೀಡಿದ ಗುರುಗಳನ್ನು ಮರೆಯಬಾರದು & ಶಿಕ್ಷಕರನ್ನ ನಾವು ಗೌರವಿಸಿ ಪೂಜಿಸಬೇಕು ಎಂದು ತಿಳಿಸಿದರು. ಜಯಲಕ್ಷ್ಮಿ ಮಹೇಶ್ ಶಿಕ್ಷಕರ ಸೇವೆಯನ್ನು ಕೊಂಡಾಡಿದರು. ಇದೇ ವೇಳೆ ಮಂಜುಳಾ ಎಸ್ ಮತ್ತು ಶ್ರೀಕಾಂತ್ ಕೆ ಉತ್ತಮ ಶಿಕ್ಷಕರು ಎಂದು ಗೌರವಿಸಿ ಸನ್ಮಾನಿಸಲಾಯಿತು.

ಕಾರ್ಯಕ್ರಮದ ಪ್ರಾಸ್ತವಿಕ ನುಡಿಯನ್ನ ತೆಲಗಿವೀರಭದ್ರಪ್ಪ ಮತ್ತು ಪ್ರಾರ್ಥನೆಯನ್ನು ಸುಮಾ ಸ್ವಾಗತ ಭಾಷಣವನ್ನು ದೀಪ ನಿರೂಪಣೆಯನ್ನು ನಾಗರಾಜ್ ಮಾಡಿದರು. ವಂದನಾರ್ಪಣೆಯನ್ನ ಶ್ರೀಕುಮಾರ್ ಮಾಡಿದರು. ಪದಾಧಿಕಾರಿಗಳಾದ ಡಾ. ಅನ್ವಿತಾ, ಕೆ.ಟಿ ಗೋಪಾಲ್ ಗೌಡ್ರು, ಸುರೇಶ ರಾವ್, ಮಂಜುಳಾ ಕರ್ಜಗಿ ಎಸ್ ಬೀರಪ್ಪ ,ರೇಖಾ ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!