ಲಸಿಕೆ ಹಾಕಿಸಿಕೊಳ್ಳಲು ಹಿರಿಯೂರು ಶಾಸಕಿ ಪೂರ್ಣಿಮಾ ಮನವಿ

ಹಿರಿಯೂರು: ಹಿರಿಯೂರು ತಾಲೂಕು ಕಸಬಾ ಹೋಬಳಿಯ ಕೋವಿಡ್ ಲಸಿಕೆ ಮಹಾ ಅಭಿಯಾನವನ್ನು ಶಾಸಕಿ ಶ್ರೀಮತಿ ಕೆ ಪೂರ್ಣಿಮಾ ಶ್ರೀನಿವಾಸ್ ರವರು ಉದ್ಘಾಟನೆ ಮಾಡಿ ಚಾಲನೆ ನೀಡಿದರು. ಈ  ಕಾರ್ಯಕ್ರಮ ದಲ್ಲಿ ಮಾತನಾಡಿದ ಅವರು ಕೋವಿಡ್ ಮುಕ್ತ ಹಿರಿಯೂರು ತಾಲೂಕನ್ನಾಗಿ ಮಾಡಲು 18 ವರ್ಷ ಮೇಲ್ಪಟ್ಟ ಎಲ್ಲರೂ ಲಸಿಕೆ ಹಾಕಿಸಿಕೊಳ್ಳವಂತೆ  ಮನವಿ ಮಾಡಿದರು. ಈ ಸಂದರ್ಭದಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಮುಖಂಡರಾದ  ಡಿ ಟಿ ಶ್ರೀನಿವಾಸ್, ಡಿವೈಎಸ್ಪಿ ರೋಷನ್ ಜಮೀರ್ , ಸಿಪಿಐ ರಾಘವೇಂದ್ರ, ಪಿಎಸ್ಐ ಪರಮೇಶ್, ತಾಲ್ಲೂಕು ವೈದ್ಯಾಧಿಕಾರಿ ಡಾ ವೆಂಕಟೇಶ್, ಇಓ ಈಶ್ವರ್ ಪ್ರಸಾದ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಶೃತಿ, ಸದಸ್ಯರಾದ ತಂಗವೇಲು, ತಿಪ್ಪೇಸ್ವಾಮಿ, ರತ್ನಮ್ಮ, ಮುಖಂಡರಾದ ವಿಶ್ವನಾಥ್, ಸೆಂಥಿಲ್, ನಾಗೇಶ್, ಚಂದ್ರಕಾಂತ, ಜಯಣ್ಣ, ಪಾಲಾಕ್ಷ, ಕುಮಾರ್, ಉಮೇಶ್ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!