ಬೆಳ್ಳಿ ಸಿಂಹಾಸನ ನಿರಾಕರಿಸಿದ ವಚನಾನಂದ ಶ್ರೀ

ದಾವಣಗೆರೆ: ‘ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಸಿಗುವವರೆಗೂ ಬೆಳ್ಳಿ ಸಿಂಹಾಸನದಲ್ಲಿ ಕೂರುವುದಿಲ್ಲ ಎಂದು ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಪೀಠಾಧಿಪತಿ ವಚನಾನಂದ ಸ್ವಾಮೀಜಿ ಹೇಳಿದ್ದಾರೆ.
ಬೆಳ್ಳಿ ಸಿಂಹಾಸನದ ಮೇಲೆ ಕೂರದ ವಚನಾನಂದ ಸ್ವಾಮೀಜಿಗೆ ಇಳಕಲ್ ಮಹಾಂತೇಶ್ವರ ಸಂಸ್ಥಾನ ಮಠದ ಗುರು ಮಹಾಂತ ಶಿವಯೋಗಿ ಸ್ವಾಮೀಜಿ ಕೇವಲ ರುದ್ರಾಕ್ಷಿ ಪೇಟ ತೊಡಿಸಲಾಯಿತು.
ಸಮುದಾಯಕ್ಕೆ ಮೀಸಲಾತಿ ಸಿಗುವಂತೆ ಮಾಡಿ ಜನರ ಹೃದಯ ಸಿಂಹಾಸನದಲ್ಲಿ ಕೂರಲು ಇಚ್ಛೆ ಪಡುತ್ತೇನೆ. ಪಂಚಮ ಪೀಠಾರೋಹಣ ಮಾಡುವುದಿಲ್ಲ ಎಂದು ವಚನಾನಂದ ಶ್ರೀಗಳು, ರುದ್ರಾಕ್ಷಿ ತುಲಾಭಾರವನ್ನೂ ಬೇಡ. ಮೀಸಲಾತಿ ಪಡೆದ ಮೇಲೆಯೇ ತುಲಾಭಾರ ಮಾಡಿಸಿಕೊಳ್ಳುವುದಾಗಿ ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!