ವೈದ್ಯರ ದಿನಾಚರಣೆ ಹಿನ್ನೆಲೆ ಯುವ ಕಾಂಗ್ರೆಸ್ ನಿಂದ ವೈದ್ಯರಿಗೆ ಸನ್ಮಾನ
![](https://garudavoice.com/wp-content/uploads/2021/07/IMG-20210701-WA0025-1024x579.jpg)
ದಾವಣಗೆರೆ. ಜು,೧; ವೈದ್ಯರ ದಿನಾಚರಣೆ ಹಿನ್ನೆಲೆಯಲ್ಲಿ ಭಾರತೀಯ ರಾಷ್ಟ್ರೀಯ ಯುವ ಕಾಂಗ್ರೆಸ್ಸಿನ ಪದಾಧಿಕಾರಿಗಳಿಂದು ದಾವಣಗೆರೆ ಸಾರ್ವಜನಿಕ ಜಿಲ್ಲಾ ಆಸ್ಪತ್ರೆಯ ಆರ್ ಎಂ ಮಂಜುನಾಥ್ ಪಟೇಲ್ ಅವರಿಗೆ ಸನ್ಮಾನಿಸಿದರು. ಕೊವಿಡ್ ಹಿನ್ನೆಲೆಯಲ್ಲಿ
ಇಡೀ ದೇಶಾದ್ಯಂತ ವೈದ್ಯರು ನಿರಂತರವಾಗಿ ಸಾರ್ವಜನಿಕರ ಸೇವೆಯಲ್ಲಿ ತಮ್ಮ ಪ್ರಾಣವನ್ನು ಮುಡುಪಾಗಿಟ್ಟ ಸೇವೆಸಲ್ಲಿಸುತ್ತಿದ್ದಾರೆ ಅವರನ್ನು ಗೌರವಿಸಬೇಕು ಎಂದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ವಕ್ತಾರರಾದ ಮೈನುದ್ದೀನ್ ಹೆಚ್ ಜೆ ಹೇಳಿದರು.ದಕ್ಷಿಣ ಯುವ ಕಾಂಗ್ರೆಸ್ ಅಧ್ಯಕ್ಷರಾದ ಸೈಯದ್ ಇರ್ಫಾನ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಸಾಧಿಕ್, ಮೊಹಮ್ಮದ್ ವಾಜಿದ್, ದಕ್ಷಿಣ ಕಾರ್ಯದರ್ಶಿಗಳಾದ ಮೊಹಮ್ಮದ್ ,ಸಮೀರ್, ರಾಕೇಶ್, ಸುನಿಲ್ ಇದ್ದರು.