ನಮಗೆ ಹರಮಾಲೆ ಗೊತ್ತಿಲ್ಲ ರುದ್ರಾಕ್ಷಿ ಮಾಲೆಯಷ್ಟೆ ಗೊತ್ತು: ಜಯಮೃತ್ಯುಂಜಯ ಶ್ರೀ

ದಾವಣಗೆರೆ: ನಮಗೆ ಹರಮಾಲೆ ಬಗ್ಗೆ ಗೊತ್ತಿಲ್ಲ. ನಮಗೆ ಗೊತ್ತಿರುವುದೇನಿದ್ದರು ರುಕ್ರಾಕ್ಷಿ ಮಾಲೆ ಮಾತ್ರ ಎಂದು ಕೂಡಲಸಂಗಮ ಪೀಠದ ಶ್ರೀ ಬಸವ ಜಯಮೃತ್ಯುಂಜಯ ಶ್ರೀಗಳು ಪರೋಕ್ಷವಾಗಿ ಹರಿಹರದಲ್ಲಿ ನಡೆಯುತ್ತಿರುವ ಹರಮಾಲೆ ಜಾತ್ರೆ ಬಗ್ಗೆ ಕುಟುಕಿದರು.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಲಿಂಗ, ವಿಭೂತಿ ಮತ್ತು ರುದ್ರಾಕ್ಷಿ ಮಾಲೆ ಮಾತ್ರ ನಮಗೆ ಗೊತ್ತು. ಹರಮಾಲೆ ಬಗ್ಗೆ ಗೊತ್ತಿಲ್ಲ. ನಮ್ಮ ಸಮಾಜದ ಜನರು ಸಂಭ್ರಮಿಸುವ ಮನಸ್ಥಿತಿಯಲ್ಲಿ ಈಗಿಲ್ಲ. ಸಮಾಜಕ್ಕೆ ಮೀಸಲಾತಿ ಬೇಕೆನ್ನುವವರು ಜ.14 ರಂದು ಕೂಡಲಸಂಗಮಕ್ಕೆ ಆಗಮಿಸಲಿ ಎಂದರು.

Leave a Reply

Your email address will not be published. Required fields are marked *

error: Content is protected !!