aam aadmi party; ಎಸ್ಪಿ ವರ್ಗಾವಣೆ ಆದೇಶ ಹಿಂಪಡೆಯಲು ಮನವಿ

ದಾವಣಗೆರೆ, ಆಗಸ್ಟ್ 17: ಜಿಲ್ಲೆಯ ಪೊಲೀಸ್ (police) ವರಿಷ್ಠಾಧಿಕಾರಿಯಾದ ಡಾ. ಕೆ. ಅರುಣ್‌ ಅವರ ವರ್ಗಾವಣೆಯನ್ನು (Transfer) ಹಿಂಪಡೆದು, ಪುನಃ ದಾವಣಗೆರೆ ಜಿಲ್ಲೆಗೆ ಕರ್ತವ್ಯ ನಿರ್ವಹಿಸುವಂತೆ ಒತ್ತಾಯಿಸಿ ಆಮ್ ಆದ್ಮಿ ಪಕ್ಷದ (aam aadmi party) ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

ಇದೇ ವೇಳೆ ಮಾತನಾಡಿದ ಪಕ್ಷದ ಜಿಲ್ಲಾಧ್ಯಕ್ಷ ಚಂದ್ರು ಬಸವಂತಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ. ಅರುಣ್‌ ದಾವಣಗೆರೆ ಜಿಲ್ಲೆಯಲ್ಲಿ ಸುಮಾರು ಐದು ತಿಂಗಳಿನಿಂದ ಕರ್ತವ್ಯ ನಿರ್ವಹಿಸಿದ್ದು, ತಮ್ಮ ಅಲ್ಪ ಅವಧಿಯಲ್ಲಿ ಒಳ್ಳೆಯ ಕೆಲಸ ಮಾಡಿದ್ದಾರೆ. ಐ.ಎ.ಎಸ್‌., ಐ.ಪಿ.ಎಸ್. ಅಧಿಕಾರಿಗಳು ಕನಿಷ್ಠ 2 ವರ್ಷಗಳ ಕಾಲ ಒಂದೇ ಕಡೆ ಕೆಲಸ ಮಾಡಬೇಕು ಎಂಬ ನಿಯಮವನ್ನು ಸರ್ಕಾರವೇ ಮಾಡಿದ್ದರೂ ತಾವು ಮಾಡಿದ ನಿಯಮವನ್ನು ಮೀರಿ ಒತ್ತಾಯಕ್ಕೆ ಮಣಿದು ಎಸ್ಪಿ ಅರುಣ್‌ ಕುಮಾರ್ ಇವರನ್ನು ಕೇವಲ ಐದು ತಿಂಗಳಿಗೆ ವರ್ಗಾವಣೆ ಮಾಡಿರುವುದು ದುರಾದೃಷ್ಟಕರ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.

ಮುಚ್ಚಿದ ನ್ಯಾಯಾಲಯದಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣಗಳ ವಿಚಾರಣೆ

ಉತ್ತಮ ಅಧಿಕಾರಿಯಾಗಿರುವ ಎಸ್ಪಿ ಡಾ. ಕೆ. ಅರುಣ್‌ ಅವರ ವರ್ಗಾವಣೆ ಆದೇಶವನ್ನು ಹಿಂಪಡೆದು, ಪುನಃ ದಾವಣಗೆರೆ (Davanagere) ಜಿಲ್ಲೆಯಲ್ಲಿಯೇ ಕರ್ತವ್ಯ ನಿರ್ವಹಿಸುವಂತೆ ಅನುವು ಮಾಡಿಕೊಡಬೇಕೆಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಪಕ್ಷದ ಕಾರ್ಯದರ್ಶಿ ಸಿ.ಆರ್. ಅರುಣ್ ಕುಮಾರ್, ಉಪಾಧ್ಯಕ್ಷ ಕೆ.ರವೀಂದ್ರ ಸೇರಿದಂತೆ ಪಕ್ಷದ ಕಾರ್ಯಕರ್ತರು ಇದ್ದರು‌.

Leave a Reply

Your email address will not be published. Required fields are marked *

error: Content is protected !!