Accident 7 Death: ಜಗಳೂರು ಬಳಿ ಭೀಕರ ಅಪಘಾತ 4 ಜನ ಸ್ಥಳದಲ್ಲೇ ದುರ್ಮರಣ.! ಸ್ಥಳಕ್ಕೆ ಎಸ್ ಪಿ ರಿಷ್ಯಂತ್ ಭೇಟಿ
![](https://garudavoice.com/wp-content/uploads/2022/01/Jagalur-accident-7-death.jpg)
ದಾವಣಗೆರೆ: (ಜಗಳೂರು): ಸಂಕ್ರಮಣ ದಿನದಂದು ಜವರಾಯ ತನ್ನ ಅಟ್ಟಹಾಸ ಮೆರೆದಿದ್ದಾನೆ. ಬೆಳ್ಳಂ ಬೆಳಗ್ಗೆ 7 ಜನರ ಸಾವಿಗೆ ಸಾಕ್ಷಿಯಾಗಿದೆ ರಾಷ್ಟ್ರೀಯ ಹೆದ್ದಾರೆ. ಜಗಳೂರು ತಾಲ್ಲೂಕಿನಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 13 ರಲ್ಲಿ ಇಂಡಿಕಾ ಕಾರು ಡಿವೈಡರ್ ಗೆ ಡಿವೈಡರ್ ಗೆ ಡಿಕ್ಕಿಯಾದ ಅಪಘಾತ ನಡೆದಿದೆ. ಸ್ಥಳದಲ್ಲಿ ನಾಲ್ಕು ಜನ ಸಾವನ್ನಪ್ಪಿದ್ರೆ ಇನ್ನುಳಿದಂತೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಜಗಳೂರಿನ ಖಾನನಕಟ್ಟೆ ಗ್ರಾಮದ ಬಳಿ ಅಪಘಾತ ಸಂಬವಿಸಿದ್ದು ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಸಾವನ್ನಪ್ಪಿದವರು ಯಾರು, ಎಲ್ಲಿಗೆ,ಯಾಕೆ ಹೋಗುತ್ತಿದ್ದರು ಎಂದು ತನಿಖೆಯನ್ನು ಪೋಲೀಸ್ ನಡೆಸುತ್ತಿದ್ದಾರೆ.
ಅಪಘಾತ ಸ್ಥಳಕ್ಕೆ ದಾವಣಗೆರೆಯ ಎಸ್ ಪಿ ರಿಷ್ಯಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಹಿಂದೆ ಹಲವು ಅಪಘಾತದಲ್ಲಿ ಹಲವರು ಸಾವನ್ನಪ್ಪಿದ ಉದಾಹರಣೆಗಳ ಬಗ್ಗೆ ಸ್ಥಳೀಯರಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.