ರಾಷ್ಟ್ರೀಯ ಸೇವಾ ಯೋಜನೆ ಯಿಂದ ಸ್ವಚ್ಚತಾ ಕಾರ್ಯಕ್ರಮ

ದಾವಣಗೆರೆ : ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದಲ್ಲಿ ರಾಷ್ಟ್ರೀಯ ಸೇವಾ ಯೋಗ ಘಟಕ-1 & 2 ರ ಅಡಿಯಲ್ಲಿ,”ಆರೋಗ್ಯ ಸ್ವಚ್ಚ ಭಾರತ ಪರಿಕಲ್ಪನೆಯೊಂದಿಗೆ ರಾಷ್ಟ್ರೀಯ ಸೇವಾ ಯೋಗ ಸ್ವಯಂ ಸೇವಕರಿಂದ ಕಾಲೇಜಿನ ಆವರಣ ಸ್ವಚ್ಛ ಗೊಳಿಸಲಾಯಿತು. ಈ ಸಂಧರ್ಭದಲ್ಲಿ ಪ್ರಾoಶುಪಾಲರಾದ ಡಾ. ಎಸ್. ಆರ್. ಅಂಜಿನಪ್ಪ ಅವರ ಕೋರಿಕೆ ಮೇರೆಗೆ ತೆಗೆದ ಎಲ್ಲ ಕಸವನ್ನು ಮಹಾನಗರ ಪಾಲಿಕೆ ಯವರು ತೆಗೆದುಕೊಂಡು ಹೋದರು.

ಈ ವೇಳೆ ಪ್ರೊ. ಭೀಮಣ್ಣ ಸುಣಗಾರ, ಪ್ರೊ. ಗಿರೀಸ್ವಾಮಿ, ರಾಷ್ಟ್ರೀಯ ಸೇವಾ ಯೋಗ ಕಾರ್ಯಕ್ರಮಾಧಿಕಾರಿಗಳಾದ ಗುರುದೇವ ಎಸ್. ಎಂ. ಹಾಗೂ ಡಾ.ಶಿವಕುಮಾರ ಕಂಪಲಿ, ಡಾ. ಮಂಜುನಾಥ್. ಜಕ್ಕವ್ವರ ಡಾ. ದಿನೇಶ್, ಡಾ. ತಿರುಮಲ, ಡಾ. ಮನೋಹರ್, ಡಾ. ಮರಳುಸಿದ್ದಪ್ಪ, ನಲ್ಲನವರ. ಶಂಭು, ಡಾ. ಸೋಮಶೇಖರ್, ಡಾ. ಬಸವರಾಜ್, ಡಾ. ನಾಗರಾಜ್, ಪ್ರೊ. ರಾಜಮೋಹನ ಮತ್ತಿತರರಿದ್ದರು.

garudavoice21@gmail.com 9740365719

Leave a Reply

Your email address will not be published. Required fields are marked *

error: Content is protected !!