Lingayat; ವೀರಶೈವ-ಲಿಂಗಾಯತ ಮಹಾ ಅಧಿವೇಶನಕ್ಕೆ ಡೇಟ್ ಫಿಕ್ಸ್

ದಾವಣಗೆರೆ, ಅ.06: ಅಖಿಲ ಭಾರತ ವೀರಶೈವ-ಲಿಂಗಾಯತ (Lingayat) ಮಹಾ ಅಧಿವೇಶನಕ್ಕೆ ಡೇಟ್ ಫಿಕ್ಸ್ ಆಗಿದ್ದು, ಡಿ.23, 24 ರಂದು ದಾವಣಗೆರೆಯಲ್ಲಿ ಮಹಾ ಅಧಿವೇಶನ ನಡೆಸಲಾಗುವುದು.

ಮಹಾಸಭಾದ ರಾ. ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಹಾಗೂ ಮಹಾಪ್ರಧಾನ ಕಾರ್ಯದರ್ಶಿ ಹಾಗೂ ಸಚಿವ ಈಶ್ವರ ಖಂಡ್ರೆ ನೇತೃತ್ವದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ದಾವಣಗೆರೆಯ ಎಂಬಿಎ ಕಾಲೇಜು ಮೈದಾನದಲ್ಲಿ ಅಧಿವೇಶನ ನಡೆಸಲು ತೀರ್ಮಾನ ತೆಗೆದುಕೊಳ್ಳಲಾಯಿತು.

siddaramaiah; ನಾನು ಯಾವ ಬಾಂಬ್ ಹಾಕಿಲ್ಲ: ಶಾಮನೂರು ಶಿವಶಂಕರಪ್ಪ

ಮಹಾ ಅಧಿವೇಶನದ ಬಗ್ಗೆ ಮಾಹಿತಿ ನೀಡಿದ ಸಚಿವ ಈಶ್ವರ ಖಂಡ್ರೆ ಅವರು, ಲಿಂಗಾಯತ ಎಲ್ಲ ಒಳಪಂಗಡಗಳನ್ನ ಒಂದೆಡೆ ಸೇರಿಸುವ ಉದ್ದೇಶದಿಂದ ಮಹಾ ಅಧಿವೇಶನ ಮಾಡಲಾಗುತ್ತಿದೆ. ಅಧಿವೇಶಕ್ಕೆ ವಿಶ್ಬದಲ್ಲಿರುವ ಸಮುದಾಯದ ಎಲ್ಲರನ್ನ, ಮಠಾಧೀಶರು, ಸಮಾಜದ ಮುಖಂಡರು ಆಹ್ವಾನ ನೀಡುತ್ತೇವೆ. ಅಧಿವೇಶನದಲ್ಲಿ ಮಹಿಳೆಯರು, ಯುವ, ರೈತ ಗೋಷ್ಟಿಗಳನ್ನ ನಡೆಸಲು ನಿರ್ಧರಿಸಲಾಗಿದೆ. ಈಗಾಗಲೇ ವೀರಶೈವ ಮಹಾಸಭಾ ಮಹಾ ಅಧಿವೇಶನದ ಸಿದ್ಧತೆ ಆರಂಭಿದೆ ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!