fire; ಲಾರಿಗೆ ಕಾರು ಡಿಕ್ಕಿ: ಒಂದೇ ಕುಟುಂಬದ ಮೂವರ ಧಾರುಣ ಸಾವು
![](https://garudavoice.com/wp-content/uploads/2023/02/Newly-married-couple-dies-accident-18.jpg)
ಅಪಘಾತದಲ್ಲಿ ನವದಂಪತಿ ಸಾವು
ಬೆಂಗಳೂರು, ಅ.೦3: ಲಾರಿಗೆ ಕಾರು ಡಿಕ್ಕಿಯಾಗಿ ಹೊತ್ತಿ ಉರಿದ (fire) ಪರಿಣಾಮ ಮೂವರು ಸಾವನ್ನಪ್ಪಿರುವ ಧಾರುಣ ಘಟನೆ ಬೆಂಗಳೂರಿನ ಸೋಂಪುರ ಬಳಿಯ ನೈಸ್ ರಸ್ತೆಯಲ್ಲಿ ನಡೆದಿದೆ.
ಒಂದೇ ಕುಟುಂಬದ ಸಿಂಧೂ, ಪ್ರಣವಿ, ಕುಷಾವಿ ಮೃತರು, ಮಹೇಂದ್ರನ್ ಸ್ಥಿತಿ ಗಂಭೀರವಾಗಿದೆ.
mortuary; 4 ಸಾವಿರ ಜನಸಂಖ್ಯೆಯ ಗ್ರಾಮದಲ್ಲಿ 400 ಅಡಿ ಸ್ಮಶಾನ, ಹೆಣ ಹೂಳಲು ಜಾಗವೇ ಇಲ್ಲ!
ಕಾರು ಮೈಸೂರು ರಸ್ತೆ ಕಡೆಯಿಂದ ಕನಕಪುರ ರಸ್ತೆ ಕಡೆಗೆ ತೆರಳುತಿತ್ತು. ಆಗ ಕಾರು ನಿಯಂತ್ರಣ ತಪ್ಪಿದ್ದು, ಲಾರಿಗೆ ಡಿಕ್ಕಿ ಹೊಡೆದು ಮೋರಿಯ ಗೋಡೆಗೆ ಗುದ್ದಿದೆ. ಪರಿಣಾಮ ಕಾರಿಗೆ ಬೆಂಕಿ ಹೊತ್ತಿಕೊಂಡಿದೆ.
ವಿಷಯ ತಿಳಿದು ಘಟನೆ ನಡೆದ ಸ್ಥಳಕ್ಕೆ ತಲಘಟ್ಟಪುರ ಸಂಚಾರ ಪೊಲೀಸರು ಭೇಟಿ ನೀಡಿದ್ದು, ಈ ಬಗ್ಗೆ ತಲಘಟ್ಟಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.