suicide; ಮಕ್ಕಳ ಮೇಲೆ ಹಲ್ಲೆ ನಡೆಸಿ ತಾಯಿ ಆತ್ಮಹತ್ಯೆ

ದಾವಣಗೆರೆ, ಅ.17: ಮಕ್ಕಳು ತನ್ನ ಮಾತು ಕೇಳುತ್ತಿಲ್ಲ ಎಂಬ ಕಾರಣಕ್ಕೆ ದೊಣ್ಣೆಯಿಂದ ತನ್ನ ಇಬ್ಬರು ಮಕ್ಕಳ ಮೇಲೆ‌ ಹಲ್ಲೆ ಮಾಡಿ ತಾನು ಕೂಡ ಆತ್ಮಹತ್ಯೆ‌ (suicide) ಮಾಡಿಕೊಂಡ ಘಟನೆ ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿ ತಾಲ್ಲೂಕಿನ ಹುಲಿಕಟ್ಟೆ ಗ್ರಾಮದಲ್ಲಿ ನಡೆದಿದೆ.

ಕೊಲೆ ಮಾಡಿದ ತಾಯಿ ಬೇಗಂ. ಆಕೆಗೆ ಇಬ್ಬರು ಮಕ್ಕಳು. 17 ವರ್ಷದ ಮಗಳು ಶಮಬಾನು ಹಾಗೂ ಮಗ ಅಮಾನುಲ್ಲಾ. ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಬೇಗಂ ಕ್ಷುಲ್ಲಕ ಕಾರಣಕ್ಕೆ ತನ್ನ ಮಕ್ಕಳ ನಡುವೆ ಜಗಳವಾಡಿದ್ದಾಳೆ. ನಂತರ ತನ್ನ ಮಕ್ಕಳು ರಾತ್ರಿ ಮಲಗಿದ ಮೇಲೆ ಅದೇ ಕೋಪದಲ್ಲಿ ದೊಣ್ಣೆಯಿಂದ ಹಲ್ಲೆ ನಡೆಸಿದ್ದು, ಹಲ್ಲೆಯಲ್ಲಿ ಮಗಳು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಮಗ ಅಮಾನುಲ್ಲಾ ದಾವಣಗೆರೆಯ ಖಾಸಗಿ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಟ ಮಾಡುತ್ತಿದ್ದಾನೆ. ತನ್ನೆರಡು ಮಕ್ಕಳು ಸಾವನ್ನಪ್ಪಿದ್ದ ವಿಚಾರ ತಿಳಿದು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಸ್ಥಳಕ್ಕೆ ವಿಜಯನಗರ ಪೊಲೀಸ್ ಠಾಣೆಯ ಎಸ್.ಪಿ ಶ್ರೀಹರಿಬಾಬು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹರಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

dowry; ವರದಕ್ಷಿಣೆ ಕಿರುಕುಳ: 05 ವರ್ಷದ ಮಗಳೊಂದಿಗೆ ಗೃಹಿಣಿ ಆತ್ಮಹತ್ಯೆ

ಪ್ರತಿನಿತ್ಯ ಮಕ್ಕಳ ಜೊತೆ ಜಗಳವಾಡುತ್ತಿದ್ದ ಬೇಗಂ ಅದರಂತೆ ಕಳೆದ ರಾತ್ರಿ ಕೂಡ ಜಗಳವಾಡಿರಬಹುದು ಎಂದುಕೊಂಡಿದ್ದರಂತೆ. ಬೆಳಗ್ಗೆ ಎಷ್ಟೋತ್ತಾದರೂ ಮನೆಯಿಂದ ಹೊರ ಬಾರದ ಹಿನ್ನೆಲೆ ಅನುಮಾನಗೊಂಡ ಸಂಬಂಧಿಕರು ಮನೆ ಒಳಗೆ ಹೋಗಿ ನೋಡಿದಾಗ ಗಾಬರಿಯಾಗಿದ್ದಾರೆ. ಮಗಳು ಸ್ಥಳದಲ್ಲೆ ಸಾವನಪ್ಪಿದ್ದು, ಮಗ ಸ್ಥಳದಲ್ಲಿ ಸಾವು ಬದುಕಿನ‌ ನಡುವೆ ಹೋರಾಡುತ್ತಿದ್ದ. ಈ ಘಟನೆಯಿಂದ ಗ್ರಾಮದಲ್ಲಿರುವ ಭಯಭೀತರಾಗಿದ್ದಾರೆ.

– ಶ್ರೀಹರಿಬಾಬು, ಎಸ್.ಪಿ, ವಿಜಯನಗರ ಪೊಲೀಸ್ ಠಾಣೆ

ಹುಲಿಕಟ್ಟೆ ಗ್ರಾಮದಲ್ಲಿ ನಡೆದ ಘಟನೆಯಿಂದ ಹೆತ್ತಾ ತಾಯಿ ಇಷ್ಟು ಕ್ರೂರಿಯಾಗಿರುತ್ತಾಳ? ಆದರೆ ಬಾಳಿ ಬದುಕಬೇಕಿದ್ದ ಮಕ್ಕಳು ಮಾತ್ರ ಮಣ್ಣಾಗಿ ಹೋಗಿದ್ದು, ಮತ್ತೊಬ್ಬ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದು, ಚಿಕಿತ್ಸೆಗೆ ಹಣ ಹೊಂದಿಸಲಾಗದೆ ಸಂಬಂಧಿಕರು ಪರದಾಡುತ್ತಿದ್ದಾರೆ. ಈ ಘಟನೆ ನಿಜಕ್ಕೂ ನೋವಿನ ಸಂಗತಿ.

– ಇರ್ಫಾನ್, ಸಂಬಂಧಿ

Leave a Reply

Your email address will not be published. Required fields are marked *

error: Content is protected !!