ಸಾಮಾಜಿಕ ಕಾರ್ಯಕರ್ತ ಹರೀಶ್ ಹಳ್ಳಿ ಕಾರಿನಿಂದ ಜಂಪ್ ಮಾಡಿ ಸಾವು.! ಪೋಲೀಸರಿಂದಲೇ ಕೊಲೆ – ಹರೀಶ್ ಪತ್ನಿ ಆರೋಪ

ದಾವಣಗೆರೆ: ಸಾಮಾಜಿಕ ಕಾರ್ಯಕರ್ತ ಹರೀಶ್ ಹಳ್ಳಿ ಅವರು ಬೆಳಗಿನ‌ ಜಾವ ಮೃತಪಟ್ಟಿದ್ದಾರೆ.

ಅವರ ಮೇಲೆ ದಾಖಲಾಗಿದ್ದ ದೂರಿನ‌ ತನಿಖೆಗಾಗಿ ಅವರನ್ನು ಕರೆತರುತ್ತಿದ್ದಾಗ ದಾವಣಗೆರೆ ಬಳಿಯ ತೋಳಹುಣಸೆ ಬ್ರಿಡ್ಜ್ ಬಳಿ ಅವರು ಕಾರ್ ನಿಂದದ ಸರ್ವೀಸ್ ರಸ್ತೆಗೆ ಹಾರಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರವಾಗಿ ಗಾಯಗೊಂಡ ಅವರು ಮೃತಪಟ್ಟಿದ್ದಾರೆ ಎಂದು ಎಸ್ ಪಿ ಅರುಣ್ ಕೆ. ತಿಳಿಸಿದ್ದಾರೆ.

ಪೋಲೀಸರ‌ ಮೇಲೆ ಪತ್ನಿ ದೂರು – ದಾವಣಗೆರೆಯ ಗಾಂಧಿನಗರ ಪೊಲೀಸ್ ಠಾಣೆಯ ಪಿಎಸ್ ಐ  ಕೃಷ್ಣಪ್ಪ, ಪಿಸಿ ದೇವರಾಜ್ ಹಾಗೂ ವಾಹನ ಚಾಲಕ ಇರ್ಷಾದ್ ಅವರು ನನ್ನ ಗಂಡ ಹರೀಶ್ ಅವರನ್ನು ಬೆಳಿಗಿನ‌ ಜಾವ  1 ಗಂಟೆಗೆ ದೌರ್ಜನ್ಯದಿಂದ ಕರೆದುಕೊಂಡು ಹೋಗಿ ಕೊಲೆ‌ಮಾಡಿದ್ದಾರೆ ಎಂದು ಹರೀಶ್ ಪತ್ನಿ ಕೆ.ಆರ್. ಲತಾ ದೂರು ದಾಖಲಿಸಿದ್ದಾರೆ.

ಬೆಳಿಗ್ಗೆ 4.30ಕ್ಕೆ ಫೋನ್ ಮಾಡಿ ನಿಮ್ಮ ಗಂಡನಿಗೆ ಆಸ್ಪತ್ರೆಗೆ ಸೇರಿಸಿದ್ದೇವೆ  ಸೀರಿಯಸ್ ಆಗಿದೆ ಎಂದು ಪೋಲೀಸರು ಹೇಳಿದ್ದರು. ನನ್ನ ಗಂಡನ ಸಾವಿಗೆ ಪಿಎಸ್ ಐ ಕೃಷ್ಣಪ್ಪ, ಪಿಸಿ ದೇವರಾಜ್, ಚಾಲಕ ಇರ್ಷದ್ ಅವರೇ ನೇರ ಕಾರಣ ಎಂದು ಲತಾ ದೂರು ನೀಡಿದ್ದಾರೆ.

ದಾವಣಗೆರೆಯ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿದ ಎಸ್ ಪಿ ಅರುಣ್ ಕೆ. ಘಟನೆ ಸಂಬಂಧಿಸಿದಂತೆ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ನ್ಯಾಯಾಧೀಶರ ಸಮ್ಮುಖದಲ್ಲಿ ಮರಣೊತ್ತರ ಪರೀಕ್ಷೆ  ನಡೆಸಲಾಗುತ್ತೆ. ಪೋಷಕರು ಒತ್ತಾಯದ ಮೇರೆಗೆ ಸಿಐಡಿ ತನಿಖೆಗೂ ವಹಿಸಲು ಮುಂದಾಗುತ್ತೆವೆ. ಪೊಲೀಸ್ ವಿರುದ್ದ ಇಲಾಖಾ ತನಿಕೆ ನಡೆಸಲಾಗುವುದು ಎಂದು ಎಸ್ ಪಿ ಅರುಣ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!