ಕ್ರೈಂ ಸುದ್ದಿ

ಕಡಿಮೆ ಬೆಲೆಗೆ ನಿವೇಶನ ಕೊಡುವುದಾಗಿ ಹೇಳಿ 4.40 ಕೋಟಿ ರೂ. ವಂಚನೆ: ಹರಿಹರದಲ್ಲಿ ದೂರು

ದಾವಣಗೆರೆ: ಜಮೀನು ಭೂ ಪರಿವರ್ತನೆ ಮಾಡಿಸಿ, ನಿವೇಶನಗಳನ್ನು ಮಾಡಿ ಕಡಿಮೆ ಬೆಲೆಗೆ ನೀಡುವುದಾಗಿ ನಂಬಿಸಿ 54 ಜನರಿಂದ ಅಂದಾಜು 4.40 ಕೋಟಿ ರೂ.ಪಾಯಿ ವಂಚನೆ ಮಾಡಲಾಗಿದೆ ಎಂದು ನಂದಿಶ್ರೀ ಕನ್‌ಸ್ಟ್ರಕ್ಷನ್ ಮಾಲೀಕ ಮಂಜುನಾಥ್ ಅವರ ಮೇಲೆ ಹರಿಹರ ಸಿಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ತಹಶೀಲ್ದಾರ್ ಕಚೇರಿಯ ದ್ವಿತೀಯ ದರ್ಜೆ ಸಹಾಯಕ ಸಂತೋಷ್ ಕುಮಾರ್ ಎಂಬುವವರು ಈ ಕುರಿತು ದೂರು ನೀಡಿದ್ದು, ನಂದಿ ಶ್ರೀ ಕನ್‌ಸ್ಟ್ರಕ್ಷನ್ ಮಾಲೀಕ ಮಂಜುನಾಥ್ ಎಂಬುವವರು 2019ರಲ್ಲಿ ಅಮರಾವತಿ ಗ್ರಾಮದ ರಿ.ಸ.ನಂ. 62/1ರ 3 ಎಕರೆ 37 ಗುಂಟೆ ಜಮೀನನನ್ನು ಭೂ ಪರಿವರ್ತನೆ ಮಾಡಿಸಿ ನಿವೇಶನಗಳನ್ನಾಗಿ ಮಾಡಿ ಕಡಿಮೆ ಬೆಲೆಗೆ ನೀಡುವುದಾಗಿ ನಂಬಿಸಿ, ನನ್ನಿಂದ 7.20 ಲಕ್ಷ ರೂ. ಹಣ ಸೇರಿದಂತೆ 54 ಜನರಿಂದ ಸುಮಾರು 4.40 ಕೋಟಿ ರೂಪಾಯಿ ಪಡೆದು ಜಮೀನನ್ನು ಭೂ ಪರಿವರ್ತನೆ ಮಾಡಿ, ನಿವೇಶನ ಮಾಡದೆ ತನ್ನ ಹೆಸಿಗೆ ವರ್ಗಾಯಿಸಿಕೊಂಡು ಇಂದು ನಾಲೆ ಎಂದು ಸುಳ್ಳು ಹೇಳುತ್ತಾ, ವಂಚಿಸಿದ್ದಾರೆ. ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ.

Click to comment

Leave a Reply

Your email address will not be published. Required fields are marked *

Most Popular

To Top