railway; ದಾವಣಗೆರೆ ರೈಲ್ವೆ ಹಳಿಯಲ್ಲಿ ಪವಾಡ.! ಇಂಜಿನ್ ಕೆಳಗಡೆಯಿಂದ ಬಚಾವ್ ಆದ ಮೇಸ್ಟ್ರು

ದಾವಣಗೆರೆ : railway ಗೂಡ್ಸ್ ರೈಲಿನಡಿ ಮಲಗಿಕೊಂಡ ವ್ಯಕ್ತಿಯೊಬ್ಬ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ನಗರದ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.

ಶಿವಕುಮಾರ್ ಎಂಬ ವ್ಯಕ್ತಿ ಬಿ.ದುರ್ಗದಲ್ಲಿ ಮುಖ್ಯಗುರುವಾಗಿದ್ದು, ದಾವಣಗೆರೆಯಿಂದ ಬಿ.ದುರ್ಗಕ್ಕೆ ಓಡಾಟ ನಡೆಸುತ್ತಿದ್ದಾರೆ. ಅಂತೆಯೇ ಗುರುವಾರವೂ ಕೂಡ ದಾವಣಗೆರೆ ರೈಲ್ವೆ ನಿಲ್ದಾಣಕ್ಕೆ ಬಂದ ಶಿವಕುಮಾರ್ ಫ್ಲಾಟ್ ಫಾರಂ ನಂಬರ್ 1ರಲ್ಲಿ ನಿಂತಿದ್ದಾರೆ. ಆದರೆ ಇಂಟರ್ ಸಿಟಿ ರೈಲು ಪ್ಲಾಟ್ ಫಾರಂ ನಂಬರ್ 2 ರಲ್ಲಿ ಬಂದಿದೆ.‌.. ಈ ನಡುವೆ ಪ್ಲಾಟ್ ಫಾರಂ ನಂಬರ್ 1ರಲ್ಲಿದ್ದ ಶಿವಕುಮಾರ್ ಫ್ಲಾಟ್ ಫಾರಂ 1ರ ಕೆಳಗೆ ರೈಲು ಹಳಿ ದಾಟಿ ಬಂದಿದ್ದಾರೆ. ಅಷ್ಟೋತ್ತಿಗೆ ಗೂಡ್ಸ್ ರೈಲು ಹತ್ತಿರ ಬಂದಿದೆ.. ಆಗ ಶಿವಕುಮಾರ್ ತಮ್ಮ ಪ್ರಾಣ ರಕ್ಷಣೆಗೆ ಗೂಡ್ಸ್ ರೈಲಿನಡಿ ಮಲಗಿದ್ದಾರೆ… ಅದೃಷ್ಟವಶಾತ್ ಗೂಡ್ಸ್ ರೈಲು ನಿಂತಿದೆ.. ಪರಿಣಾಮ ಶಿವಕುಮಾರ್ ಬದುಕಿಳಿದಿದ್ದಾರೆ.

ಗಂಗಾ ಕಲ್ಯಾಣ: ಬಾಕಿ ಅರ್ಜಿಗಳನ್ನು ಎರಡು ತಿಂಗಳಲ್ಲಿ ಪೂರ್ಣಗೊಳಿಸಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಖಡಕ್ ಸೂಚನೆ

ಇನ್ನು ರೈಲ್ವೆ ಪೊಲೀಸರು ಟ್ರೈನ್ ನಡಿ ಇದ್ದ ಶಿವಕುಮಾರ್ ನನ್ನು ಹೊರ ಕರೆತಂದಿದ್ದಾರೆ, ಮೈ,ಕೈಗೆ ಸಣ್ಣಪುಟ್ಟ ಗಾಯಗಳಾಗಿದೆ. ಶಿವಕುಮಾರ್ ನ್ನು ಮನೆಗೆ ಕಳಿಸಿದ್ದಾರೆ. ಅದೃಷ್ಟವಶಾತ್ ಯಾವುದೇ ಅವಘಡ ಇಲ್ಲದೆ ಇದ್ದರಿಂದ ಯಾವುದೇ ಪ್ರಕರಣ ದಾಖಲಾಗಿಲ್ಲ ಎನ್ನಲಾಗಿದೆ.

Leave a Reply

Your email address will not be published. Required fields are marked *

error: Content is protected !!